ನಿಂತ ನೆಲ ಕುಸಿದು
ಕಷ್ಟಸಾಗರದಲಿ ತೇಲಿಬಿದ್ದು
ಅತ್ತಿತ್ತ ಅಲುಗಿ, ಎತ್ತಲೋ ಸಾಗುವ
ಹುಟ್ಟು ಹಾಕಿದರೂ ಹಿಮ್ಮೆಟ್ಟುವ
ದೋಣಿಯಲಿ ಕೈಬಿಟ್ಟು
ನಿಂತು ನೋಡಿದರೆ
ಎಲ್ಲೆಲ್ಲೂ ನೀರು ಉಪ್ಪುಪ್ಪು ನೀರು
ಹಣೆಗೆ ಕೈ ಹಚ್ಚಿದಾಗ
ಕಿರಿದಾದ ಕಣ್ಣೆವೆಗಳ ನಡುವೆ
ಎಲ್ಲಿಂದಲೋ ತೂರಿಬರುವ
ಒಂದೇ ಒಂದು ಕಿರಣ
ಇದ್ದದ್ದನ್ನು ಕ್ಷಣಕಾಲ ಮರೆಮಾಚುವ
ಅದು ಮರೀಚಿಕೆಯಾಗಿದ್ದರೂ
ಅದೇ ಕಿರಣ
ಆ ಒಂದೇ ಕಿರಣ ಸಾಕು
ಆಶಾಕಿರಣವದು
Subscribe to:
Post Comments (Atom)
No comments:
Post a Comment